ಪುಟಗಳು

3.11.16

habbada batte


bathroom



sweets parade intro


gym


ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿಯುಂಟು

ಅಲೆವ ಮನಗಳಿಗೆ ಒನ್ ವೇ ಟಿಕೆಟ್
ಅಂದು ನನಗೆ ನಾ ಸ್ಕೂಟಿ ಕೊಂಡು, ಮೊದಲ ಬಾರಿ ಬೆಂಗಳೂರಿನ ಟ್ರಾಫಿಕ್‌ಗಳ ಮಧ್ಯೆ ನುಗ್ಗಿಸಿ ಓಡಿಸಿದಷ್ಟೇ ಖುಷಿಯಾಗಿತ್ತು. ತಳಮಳವೆಲ್ಲ ಕರಗಿ ಆತ್ಮವಿಶ್ವಾಸವಾಗಿ ಬದಲಾಗುತ್ತಿರುವ ಆ ಚಟಪಟ ಕುದಿತ, ಒಳಗಿನ ಬೇಗುದಿ ಅರಿವಿಗೆ ಬರುತ್ತಿತ್ತು. ಸಂಜೆಯ ಹೊತ್ತು, ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದೆ, ಒಬ್ಬಳೇ. ಹೊರಟದ್ದೆಲ್ಲಿಗೆ? ಟಿಕೆಟ್ ಏನೋ ದೆಹಲಿಗಿತ್ತು. ಆದರೆ ನನ್ನ ಗುರಿ ಅದೆಲ್ಲಿಗೋ ಅದೆಲ್ಲಿಗೋ, ಗೊತ್ತಿರಲಿಲ್ಲ. ಆದರೆ ಎಲ್ಲಿಗೋ ಹೋಗುವೆನೆಂಬುದು ಖಾತ್ರಿಯಾಗಿತ್ತು. ಎಲ್ಲೂ ಹೋಗಲಾಗದಿದ್ದರೆ ತಿರುಗಿಯಂತೂ ಬರಬಲ್ಲೆನೆಂಬ ವಿಶ್ವಾಸವಿತ್ತು. ಊರು ನೋಡುವುದು ನನ್ನ ಗುರಿಯಾಗಿರಲಿಲ್ಲ, ಬದುಕು ನೋಡಬೇಕಿತ್ತು. ಹಾಗಾಗಿ ಸಿದ ್ಧಮಾದರಿ ರಚಿಸಿಕೊಂಡಿರಲಿಲ್ಲ. ಕೈಯ್ಯಲ್ಲಿ ಒಂದು ತಿಂಗಳ ರಜೆ, ಎಟಿಎಂನಲ್ಲಿ ಒಂದಿಡೀ ವರ್ಷದ ಸಂಬಳದಲ್ಲಿ ಹೀಗೆ ಗೊತ್ತುಗುರಿ ಇಲ್ಲದೆ ಅಲೆಯಲೆಂದೇ ಎತ್ತಿಟ್ಟ ಹಣ, ಮೊಬೈಲ್, ಮತ್ತೊಂದು ಬ್ಯಾಕ್‌ಪ್ಯಾಕ್. 
ಹೊರಡುವ ಮೊದಲಿನ ಒಂದು ತಿಂಗಳು ಅಪ್ಪಅಮ್ಮನನ್ನು ಒಪ್ಪಿಸಲು ನಡೆಸಿದ ಅಳು, ಜಗಳ, ಕೋಪ, ಹಟ, ಕೆಲಸದ ಕಿರಿಕಿರಿ, ಅಜ್ಜನ ಆನಾರೋಗ್ಯ, ಅವನ ದಬ್ಬಾಳಿಕೆ ಎಲ್ಲವೂ ನೆನಪಿನ ರೈಲನ್ನೇರಿ, ಕಂಬಿಯಲ್ಲಿ ನನ್ನೊಂದಿಗೆ ಓಡಲು ಹವಣಿಸುತ್ತಿದ್ದವು. ಆದರೆ ನಾನು ಒಬ್ಬಳೇ ಹೋಗಬೇಕಿತ್ತು. ಯಾವುದೆಲ್ಲದರಿಂದ ದೂರ ಓಡಲು ಪ್ರಯತ್ನಿಸಿದ್ದೆನೋ ಅವೇ ಬೆನ್ನು ಬಿದ್ದರೆ?! ನಿರ್ದಯಿಯಾಗಲು ನಿರ್ಧರಿಸಿದೆ. ಎಲ್ಲವನ್ನೂ ನನ್ನೆಲ್ಲ ಶಕ್ತಿ ಒಗ್ಗೂಡಿಸಿ ಹೊರ ತಳ್ಳಿದೆ. ಕಂಬಿಗಳಡಿಯಲ್ಲಿ ಸಾವನ್ನಪ್ಪಿದ ಅವುಗಳ ಬಗ್ಗೆ ನನಗೆ ಕಿಂಚಿತ್ತೂ ಬೇಸರವಾಗಲಿಲ್ಲ. ಭಯ, ಕೀಳರಿಮೆಗಳನ್ನು ನನ್ನ ಕನಸು, ಧೈರ್ಯ, ನನ್ನ ಮೇಲಿನ ನಂಬಿಕೆಗಳು ತಟ್ಟಿ ಮಲಗಿಸಿದವು. ಇದೀಗ ಮನಸ್ಸು ಓಡುತ್ತಿತ್ತು, ಕನಸು ಕಾಣುತ್ತಿತ್ತು, ರೈಲಿಗಿಂತಲೂ ವೇಗವಾಗಿ.
ನಾನಿದ್ದ ಬೋಗಿಯಲ್ಲೇ ಇದ್ದರು ಬಿಹಾರದ ಆ ಆಂಟಿ ತಮ್ಮ ಮಗುವಿನೊಡನೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮಗುವಿನ ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡಲು ಕರೆದುಕೊಂಡು ಹೋದವರು. ರಜೆಗೆ ಮನೆಗೆ ತೆರಳುತ್ತಿರುವ ಚೆನ್ನೈನಲ್ಲಿ ಓದುತ್ತಿರುವ ರಾಜಸ್ತಾನದ ಆ ಹುಡುಗ, ದಕ್ಷಿಣ ಭಾರತ ಪ್ರವಾಸ ಕೈಗೊಂಡ ಪಂಜಾಬ್‌ನ ಕುಟುಂಬ- ಒಂದು ಮಿನಿ ಭಾರತವೇ ಬೋಗಿಯೊಳಗೆ ಬಂಧಿಯಾಗಿತ್ತು. ಮತ್ತು ದಿನವೊಂದರ ಪಯಣದಲ್ಲಿ ಅವರೆಲ್ಲರ ಬದುಕು ನನ್ನ ಬದುಕಿನಲ್ಲಿ ಪಾಲು ಪಡೆದಿದ್ದವು. ಮೊದಲು ಕಷ್ಟಸುಖ ಹಂಚಿಕೊಂಡೆವು, ನಂತರ ಹರಟಿದೆವು, ಕಿಚಾಯಿಸಿದೆವು, ಅಂತ್ಯಾಕ್ಷರಿ ಆಡಿದೆವು, ಟೀಯನ್ನು ಒಬ್ಬರಿಗೊಬ್ಬರು ಕೊಡಿಸಿ ಒಟ್ಟಿಗೆ ಕುಡಿದೆವು. ಗೆಳೆಯರೊಡನೆ ಬಂದಿದ್ದರೆ ಅಪರಿಚಿತರೊಡನೆ, ವಯಸ್ಸಿನ ಹಂಗಿಲ್ಲದೆ, ಮೇಲು ಕೀಳು, ಬಡವಶ್ರೀಮಂಥ ಬೇಧವಿಲ್ಲದೆ ಈ ಪರಿಯ ಬಾಂಧವ್ಯವೊಂದು ಹುಟ್ಟಿಕೊಳ್ಳಲು ಸಾಧ್ಯವಿತ್ತೇ? ನನ್ನನ್ನು ನಾನು ಈ ಮಟ್ಟಿಗೆ ಸುತ್ತಲಿನ ಸಮಾಜಕ್ಕೊಡ್ಡುವ ಅವಕಾಶವಿತ್ತೇ? ಯೋಚಿಸುತ್ತಿದ್ದೆ.
ಹೊರಗೆ ಪ್ರಕೃತಿ ತನ್ನ ರೀಲನ್ನು ಬಿಚ್ಚಿಕೊಳ್ಳುತ್ತಲೂ, ಚಿತ್ರಗಳನ್ನು ಬದಲಾಯಿಸುತ್ತಲೂ, ರಾಜ್ಯ ಬದಲಾದಂತೆ ಮಣ್ಣಿನ ಪರಿಮಳದಲ್ಲೇ ಸೂಚನೆ ನೀಡುತ್ತಲೂ ಹರವಿಕೊಂಡಿತ್ತು. ದೆಹಲಿಯಲ್ಲಿ ಬೆನ್ನ ಮೇಲೆ ಬೇತಾಳದಂತೆ ಬ್ಯಾಕ್‌ಪ್ಯಾಕ್ ಹೊತ್ತು ಹೇಳಲು ಕತೆ ಹುಡುಕುತ್ತಾ ನಡೆಯತೊಡಗಿದೆ. ಚಾಂದಿನಿ ಚೌಕ್‌ನ ಗಲ್ಲಿಯಲ್ಲಿ ಹಾದೆ. ಯಾವುದೋ ಹೈವೇಯಲ್ಲಿ ತೆರಳುವ ಅಲಂಕೃತ ಲಾರಿಯಂತೆ ಚಾಂದಿನಿ ಚೌಕ್‌ನ ಪುಟ್ಟ ಗಲ್ಲಿ ಜಿಗಮಗ ಎನ್ನುತ್ತ ತುಂಬಿ ತುಳುಕುತ್ತಿತ್ತು. ಅಲ್ಲೇ ಹೊಟೇಲ್ ಒಂದರ ರೂಂ ಬುಕ್ ಮಾಡಿ ಲಗೇಜನೆಲ್ಲ ಇಳಿಸಿ ಸುತ್ತಲು ಹೋದೆ. ನಂತರದ ಇಪ್ಪತ್ತು ದಿನ ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಂಚಲ್‌ಗಳಲ್ಲಿ ಅಲೆದೆ. ಪ್ರೇಕ್ಷಣೀಯ ಸ್ಥಳಗಳಿಗಿಂತಲೂ ಊರೂರು ಸುತ್ತಿದೆ. ಅಲೆದದ್ದರ, ಕಂಡಿದ್ದರ ಕತೆ ಇನ್ನೊಮ್ಮೆ ಹೇಳುವೆ. ಹೇಳಹೊರಟಿದ್ದು ಕಲಿತದ್ದರ ಬಗ್ಗೆ. 
ಮೊದಲೆಲ್ಲ ಖಾಲಿ ಎನಿಸುತ್ತಿದ್ದ ಮನಸ್ಸು ಒಳಗಿನಿಂದ ತುಂಬಿಕೊಂಡ ಅನುಭವ. ನನ್ನ ಅಧೈರ್ಯ, ಕೀಳರಿಮೆಗಳು ನಾನು ತಿನ್ನಿಸುವ ಮೊದಲೇ ಅವೇ ಸೈನೈಡ್ ತಗೊಂಡಿದ್ದವು. ಪ್ರತಿ ಕ್ಷಣವೂ ಎಚ್ಚರಿಕೆಯಿಂದ, ಮೈಮೇಲೆ ಪ್ರಜ್ಞೆ ಇಟ್ಟುಕೊಂಡೇ ಇರುವುದು, ಎಲ್ಲಿಲ್ಲಿ ಖರ್ಚನ್ನು ಮಿತಿಗೊಳಿಸಬಹುದೋ ಅಲ್ಲೆಲ್ಲ ಮಿತಿಗೊಳಿಸುವುದು, ಮೊದಲೇ ಯೋಜಿಸಿದ್ದಲ್ಲದ್ದರಿಂದ ಪ್ರತಿಕ್ಷಣ ನಿರ್ಧಾರ ತೆಗೆದುಕೊಂಡಿದ್ದು ಎಲ್ಲವೂ ನನ್ನ ಸಾಮರ್ಥ್ಯವನ್ನು ಹಿಗ್ಗಿಸಿದ್ದವು. ದಾರಿಯಲ್ಲಿ ಸಿಕ್ಕ ಒಂದಿಷ್ಟು ಗೆಳೆಯ ಗೆಳತಿಯರು ನನ್ನಂತೆಯೇ ಒಬ್ಬರೇ ಬಂದವರಿದ್ದರು, ತಿರುಗಾಟದ ರುಚಿ ಹತ್ತಿ ಲಕ್ಷಗಟ್ಟಲೆ ಸಂಬಳದ ಕೆಲಸವನ್ನೇ ಬಿಟ್ಟು ವರ್ಷದಿಂದ ಅಲೆಮಾರಿಗಳಾದವರಿದ್ದರು, ಹಾಗೆ ಅಲೆಯುತ್ತಾ ಅದಾವುದೋ ಹಳ್ಳಿಯೊಂದರಲ್ಲಿ ಬಡ ಮಕ್ಕಳಿಗೆ ಪಾಠ ಹೇಳುತ್ತಾ ನೆಲೆ ನಿಂತ ಸಾಫ್ಟ್‌ವೇರ್ ಎಂಜಿನಿಯರ್ ಸಿಕ್ಕರು. ಇನ್ನೊಬ್ಬರು ಹಿಮಾಲಯದ ಸಾಧುಗಳ ಬಳಿ ಹೊರಟವರು ವೈರಾಗ್ಯದಿಂದ. ಬದುಕಿನೋಟದಲ್ಲಿ ಅವರವರ ನೆಮ್ಮದಿಯನ್ನು ಹುಡುಕಿಕೊಂಡು ಅಲೆವವರು..
ಅಪರಿಚಿತರೊಂದಿಗೆ ಮಾತನಾಡಬೇಡ ಎಂದೇ ಕೇಳಿ ಬೆಳೆದಿದ್ದ ನನಗೆ ಮೊದಲ ಬಾರಿಗೆ ಅಪರಿಚಿತ ಜಗತ್ತು ಎಷ್ಟು ಸುಂದರವಾಗಿದೆ ಎಂಬ ಅರಿವು ಉಂಟಾಯಿತು. ದಾರಿಯಲ್ಲಿ ಪರಿಚಿತರಾದವರು ಕೆಲವರು ಟಾಟಾ ಹೇಳಿ ಹೋದರು. ಕೆಲವರು ನಂಬರು, ಇಮೇಲ್ ಐಡಿ ನೀಡಿ ನನ್ನ ಸೋಷಿಯಲ್ ನೆಟ್‌ವರ್ಕ್ ಬೆಳೆಸಿದರು. ಎಲ್ಲೋ ಹುಟ್ಟಿ ಬೆಳೆದವರ ಬದುಕಿನ ಕೆಲ ಹೊತ್ತಿನ ಪಾಲು ನನಗೆ ದಕ್ಕಿತ್ತು. ಹಂಚಿಕೊಂಡು ಬದುಕುವ ಹಾಗೂ ಬದುಕು ಹಂಚಿಕೊಳ್ಳುವ ವಿಶಿಷ್ಟ ಗುಣವನ್ನು ಈ ಪ್ರವಾಸ ಕಲಿಸಿತ್ತು. ಕೆಟ್ಟ ಅನುಭವಗಳೂ ಆದವು. ಆದರೆ ಅನುಭವಗಳಿಂದ ತಾನೇ ಕಲಿಯಲು ಸಾಧ್ಯ?
ಬಿಸಿಲು, ಮಂಜು, ಮಳೆ, ಚಳಿ, ಏಕಾಂತ- ಆದರೆ ಏಕಾಂಗಿಯಲ್ಲ... ಯೋಚನೆಗಳು ವಿಸ್ತಾರರೂಪ ಪಡೆದಿದ್ದವು, ಸಮಯವಿದೆಯೆಂದು ಎಲ್ಲವನ್ನೂ ಒಂದೇ ದಿನ ನೋಡುವ ಹಪಹಪಿಗೆ ಬೀಳಲಿಲ್ಲ. ಒಂದೊಂದು ದಿನ ಒಬ್ಬಳೇ ಸುಮ್ಮನೇ ಯೋಚಿಸುತ್ತಾ, ಕನಸು ಕಾಣುತ್ತಾ ಕಳೆದೆ. ಆ ಸಮಯವೂ ತಿರುಗಾಡಿದಷ್ಟೇ ಅಮೂಲ್ಯ. ಏಕೆಂದರೆ ಸಮಯದ ಹಿಂದೆ ನಾ ಓಡುತ್ತಿರಲಿಲ್ಲ. ತಿರುಗಿ ಬೆಂಗಳೂರಿಗೆ ಬರುವಾಗ ಜಗ ಸುತ್ತುವ ಕನಸು ಅರಳುತ್ತಿತ್ತು. ಬಂದೊಡನೆಯೇ ವರ್ಷಗಳಿಂದ ಮುಂದೂಡುತ್ತಿದ್ದ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದೆ.
ರೇಶ್ಮಾರಾವ್ ಸೊನ್ಲೆ

nachi hijakku


gates


appy happy


ತುಂಬಾ ಸಿಂಬಲ್!

ಸಾವಿರ ಚಿಹ್ನೆಗಳ ಕಥೆ
ಚುನಾವಣೆ ಘೋಷಣೆಯಾದ ದಿನದಿಂದಲೂ ಕಂಡಕಂಡಲ್ಲೆಲ್ಲ ಕೈ, ಕಾಲು, ಕಮಲ, ಪೊರಕೆ, ಆನೆ, ಸೈಕಲ್, ಕಾಯಿ, ನೈಲ್ ಕಟ್ಟರ್, ಬ್ರಶ್‌ಗಳು ನೇತಾಡುತ್ತಿವೆ. ಹೀಗೆ ಎಲ್ಲದರ ಸಂಭ್ರಮದ 'ಹ್ಯಾಂಗ್‌' ಔಟ್‌ನಿಂದ ಚುನಾವಣಾ ಕಣ ರಂಗೇರಿದೆ. ಭಾರತದಲ್ಲಿ 1616 ಪಕ್ಷಗಳು ನೋಂದಣಿಯಾಗಿವೆ. ಅದರಲ್ಲಿ 6 ರಾಷ್ಟ್ರೀಯ, 47 ರಾಜ್ಯ ಮಟ್ಟದ ಹಾಗೂ 1563 ಪ್ರಾದೇಶಿಕ ಪಕ್ಷಗಳಾಗಿವೆ. ಈ ಎಲ್ಲ ಪಕ್ಷಗಳಿಗೂ ಒಂದೊಂದು ಚಿಹ್ನೆ ಜೊತೆಗೆ ಪಕ್ಷೇತರರಾಗಿ ಸ್ಪರ್ಧಿಸುವವರಿಗೂ ಒಂದೊಂದು ಚಿಹ್ನೆ ಎಂದರೆ ಏನಿಲ್ಲವೆಂದರೂ 2000ಕ್ಕೂ ಅಧಿಕ ಚಿಹ್ನೆಗಳಿವೆ!ಹೆಸರಿದ್ದರೂ ಚಿಹ್ನೆಗಳೇಕೆ?ಸಾವಿರಗಟ್ಟಲೆ ಪಕ್ಷಗಳಿವೆ, ಪ್ರತಿಯೊಂದಕ್ಕೂ ಹೆಸರಿದೆ, ಅದರಿಂದ ನಿಲ್ಲುವ ಪ್ರತಿ ಅಭ್ಯರ್ಥಿಗೂ ಹೆಸರಿದೆ. ಆದರೂ ಚಿಹ್ನೆಗಳ ಬಳಕೆ ಏಕೆಂಬ ಪ್ರಶ್ನೆ ಹಲವರನ್ನು ಕಾಡಿರಬಹುದಲ್ಲವೇ? ಇದಕ್ಕೆ ಉತ್ತರ ಇಲ್ಲಿದೆ. 1951ರಲ್ಲಿ ದೇಶದ ಮೊದಲ ಲೋಕಸಭಾ ಚುನಾವಣೆ ಏರ್ಪಟ್ಟಾಗ ಬಹುತೇಕ ಮತದಾರರು ಅನಕ್ಷರಸ್ಥರಾಗಿದ್ದರು. ಹಾಗಾಗಿ ಅವರಿಗೆ ಅಭ್ಯರ್ಥಿಗಳ ಹೆಸರು ಓದಿ ಮತ ಚಲಾಯಿಸುವುದು ಸಾಧ್ಯವಿರಲಿಲ್ಲ. ಇದರಿಂದ ಪಕ್ಷಗಳು ಒಂದೊಂದು ಸಂಕೇತವನ್ನು ತಮ್ಮದಾಗಿಟ್ಟುಕೊಳ್ಳುವ ಅನಿವಾರ್ಯತೆಗೆ ಬಿದ್ದವು. ಹೀಗೆ ಪಕ್ಷಗಳು ತಮ್ಮನ್ನು ಸಂಕೇತಿಸುವ ಚಿಹ್ನೆವನ್ನು ಹೊಂದುವಾಗ ಅವುಗಳು ತಮ್ಮ ಸಿದ್ಧಾಂತವನ್ನು ಧ್ವನಿಸುತ್ತಿರಬೇಕೆಂದು ಬಯಸಿ ಸಿದ್ಧಪಡಿಸಿದವು. ಹಾಗಾಗಿ ಒಂದು ಚಿಹ್ನೆಯ ಬಣ್ಣ, ಚಿತ್ರ, ಅದು ತಿರುಗಿರುವ ದಿಕ್ಕು ಪ್ರತಿಯೊಂದೂ ಪಕ್ಷದ ಧ್ಯೇಯವನ್ನು ಧ್ವನಿಸುತ್ತವೆ. ಚುನಾವಣಾ ಆಯೋಗ ನೀಡುವ ಕೆಲವು ಚಿಹ್ನೆಗಳಲ್ಲೇ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿರುವುದರಿಂದ ಹಾಗೂ ನಿತ್ಯ ಸಾಮಗ್ರಿಗಳು ಜನಮಾನಸಕ್ಕೆ ಹೆಚ್ಚು ಬೇಗ ತಲುಪುತ್ತವೆ ಎಂಬ ಕಾರಣದಿಂದ ಕುಕ್ಕರ್, ಸೈಕಲ್, ಬಿಲ್ಡಿಂಗ್, ಪೆನ್, ಕಪ್ಪುಹಲಗೆ, ಹೊಲಿಗೆ ಯಂತ್ರ, ಟಿವಿ, ಕೇಕ್, ಕ್ಯಾರೆಟ್, ಸ್ಕೂಲ್ ಬ್ಯಾಗ್ ಪ್ರತಿಯೊಂದೂ ಪಕ್ಷಗಳ ಸಂಕೇತವಾಗಿ ಹೊರಬಂದಿವೆ.ಪಕ್ಷಿಗಳಿಗೆ ನಿಷೇಧ!ಒಂದೊಮ್ಮೆ ನವಿಲು, ಗಿಳಿ, ಪಾರಿವಾಳ ಎಲ್ಲವೂ ಪಕ್ಷಗಳ ಸಂಕೇತಗಳಾಗಿದ್ದವು. ಪ್ರಚಾರದ ಸಮಯದಲ್ಲಿ ಪಕ್ಷಗಳು ನಿಜವಾದ ಪಕ್ಷಿಗಳನ್ನೇ ಬಳಸತೊಡಗಿದ್ದರಿಂದ ಪ್ರಾಣಿದಯಾ ಸಂಘಗಳು ಹೋರಾಟ ನಡೆಸಿ ಪಕ್ಷಿಗಳ ಸಂಕೇತಗಳನ್ನು ಬ್ಯಾನ್ ಮಾಡಿಸಿದವು.ಕತ್ತೆ ಮತ್ತು ಡೆಮೋಕ್ರಟಿಕ್ ಪಕ್ಷ1828ರಲ್ಲಿ ಅಮೆರಿಕದಲ್ಲಿ ಡೆಮೋಕ್ರಟಿಕ್ ಪಕ್ಷದಿಂದ ಆಂಡ್ರ್ಯೂ ಜಾಕ್ಸನ್ ಕಣಕ್ಕಿಳಿದಾಗ ವಿರೋಧ ಪಕ್ಷದವರು ಅವನನ್ನು 'ಕತ್ತೆ' ಎಂದು ಜರಿದರು. ಆದರೆ ಜಾಕ್ಸನ್ ಕೆರಳದೆ ಭ್ರಷ್ಟಾಚಾರ ಹೊಡೆದೋಡಿಸುವ ಮೊಂಡುತನ ತನ್ನದೆಂದು ಕತ್ತೆಯನ್ನೇ ತನ್ನ ಪ್ರಚಾರ ಕಾರ್ಯಕ್ರಮದಲ್ಲಿ ಚಿಹ್ನೆಯಾಗಿ ಬಳಸಿದರು. ನಂತರ 1837ರಲ್ಲಿ ಪ್ರಖ್ಯಾತ ವ್ಯಂಗ್ಯಚಿತ್ರಕಾರ ಥಾಮಸ್ ನ್ಯಾಸ್ಟ್ ಡೆಮೋಕ್ರಟಿಕ್ ಪಕ್ಷವನ್ನು ಟೀಕಿಸಲು ಕತ್ತೆಯನ್ನೇ ಬಳಸುವ ಮೂಲಕ ಪಕ್ಷದೊಂದಿಗೆ ಕತ್ತೆಯ ಸಂಬಂಧವನ್ನು ಬಿಗಿಗೊಳಿಸಿದ. ಈಗಲೂ ಅಧಿಕೃತವಾಗದ 'ಕತೆ'್ತಯನ್ನೇ ಡೆಮೋಕ್ರಟಿಕ್ ಪಕ್ಷ ಧೈರ್ಯ ಹಾಗೂ ಸಂಕಲ್ಪದ ಸಂಕೇತವಾಗಿ ತನ್ನ ಪ್ರಚಾರಕ್ಕೆ ಬಳಸುತ್ತಿದೆ. ಆದರೆ, ವಿರೋಧ ಪಕ್ಷ ಮಾತ್ರ ಕತ್ತೆಯ ದಡ್ಡತನ ಹಾಗೂ ತಿದ್ದಲಾಗದ ಬುದ್ಧಿಯ ಮಾತುಗಳನ್ನೆತ್ತಿ ಪ್ರತಿಪಕ್ಷವನ್ನು ಜರಿಯುತ್ತಿದೆ.= ರೇಶ್ಮಾ